Kuppalli photos – ಕುಪ್ಪಳಿ ಚಿತ್ರಗಳು

ಈ ಸಲ ಕಾರ್ತಿಕ ಮಾಸದ ಕೊನೆಯಲ್ಲಿಕೊಟ್ಟೆಮಣೆಗೆ ಕಾಲು ಕೊಟ್ಟುಕೊನೆ ತೆಗಿಬೇಕಂದ್ರೆ ಕತ್ತಲೆಗಟ್ಟೋಮಳೆಯ ಕಡೆಗಣಿಸಿ ಔಷಧಿ ಹೊಡೀಬೇಕಲ್ಲಾ….. ಮಳೆಯ ಚೇಷ್ಟೆಯ ನಡುವೆಯೂ ನಮ್ಮ ಇಸ್ಕೂಲಿನ ಗೇಟನ್ನು ಕಂಡಾಗ ಸವಾರಿ ಹೊರಟ ದಾರಿ ಒಮ್ಮೆಲೆ ಮರೆತಂದಿದೆ …… ಹಸಿರ ಉಸಿರಲಿ ರಾಮನ ಮಂಟಪ……….ತುಂಗೆಯ ಶ್ರೇಯಕ್ಕೆ ಬಿಳಿಗೆಂಪು ಕೇಂದ್ರವಿದು……..ಕಂಡು ಕಣ್ತುಂಬಿಕೊಂಡಾಗ ಸೊಗಸುಗಳ ಹೂರಣವಿದು……… ಹಸಿರ ಚಾದರ ಹೊದ್ದ ಪುಟ್ಟ ಗೂಡಲ್ಲಿ ಕೂತು ಮಳೆನಾಡ ಮಳೆಹನಿಗಳ ಎಣಿಸುತ್ತಿರುವಂತೆ .. ಹೊಸ ಪದಮುತ್ತುಗಳ ಪೋಣಿಸುವ ಆಶಾಭಾವದಿ ಹನಿಗಳಲ್ಲಿ ಮಿಂದೇಳುತ್ತಿದ್ದಾರಲ್ಲ ನಮ್ಮ ಕನ್ನಡದ ಕವಿಸ್ವರ್ಣ ಮುಕುಟ […]
ಮತ್ತೆ ಶುರುವಾಗಿದೆ ಮುಂಗಾರು…ಕುಡಿಯೊಡೆಯುತಿವೆ ಹಸುರೆಲೆ ಚಿಗುರು…ಮಲೆನಾಡಿನ ಮಳೆಗಾಲದ ಚಂದವ…ಬಣ್ಣಿಸಲು ಅಸಾಧ್ಯವೇ ಸರಿ….ಒಂದೆಡೆ ಇಂಬಳ ಜೀರುಂಡೆಗಳ ಕಿರುಕುಳವಾದರೆ…ಇನ್ನೊಂದೆಡೆ ಮನೆಯಲಿ ಹಲಸಿನ ದೋಸೆ ಮುಳುಕಗಳ ಪರಿಮಳ…ಜಡಿ ಮಳೆಗೆ ವಿದ್ಯುತ್ ಇಲ್ಲವಾದರೆಸೀಮೆ ಎಣ್ಣೆ ದೀಪಗಳ ನರ್ತನ ಒಂದೆಡೆಯಾದರೆ…ಮಳೆಯ ತಂಡಿಗೆ ಮುದುಡಿ ಕಂಬಳಿ ಹೊದ್ದು ಕೂರುವ ಹಿರಿಯರು ಇನ್ನೊಂದೆಡೆ…ಇದುವೇ ಮಳೆಯ ಸ್ವರ್ಗ ಮಲೆನಾಡಿನ ಸಾಮಾನ್ಯ ಚಿತ್ರಣ… ಮುಂಗಾರಿನ ಆಗಮನಕ್ಕೆ ದರಗೆಲ್ಲ ಕೊಳೆತಿತ್ತು…ಯಾವುದೋ ಒಂದು ಮನಸಿಗೆ ಗ್ರಹಿಸಲಾಗದ ಪರಿಮಳ ಅಡವಿಯಲ್ಲಾ ಮುತ್ತಿತ್ತು…ಕೊಳೆತ ದರಗಿನ ಅಡಿಯಲ್ಲಿ ಮಿಜುಗುಡುತಿತ್ತು ಇಂಬಳಗಳ ಗುಂಪು…ರಕ್ತವೋ ಎಲೆಗಳ ಪತ್ರವೋ ಹೊಟ್ಟೆಗೆ ಸಿಕ್ಕರೆ […]
ಜಿಟಿ-ಜಿಟಿ ಮಳೆಯನ್ನೂ ಲೆಕ್ಕಿಸದೆ ಎಮ್ಮೆ-ಕೋಣಗಳು ಓಡಾಡಿದ ಆ ಕೆಸರಿನ ಹಾದಿಯಲ್ಲೇ ಸಾಗಿ ಹಲಸಿನ ಮರವನ್ನೇರಿ ಹಲಸಿನ ಹಣ್ಣಿಗೆ ಲಗ್ಗೆ ಇಡುವುದು ಮಲೆನಾಡಿಗರಿಗೆ ಹೊಸತೇನಲ್ಲ ಬಿಡಿ! ಯಾವ ಯಾವ ಜಾಗದಲ್ಲಿ ಯಾವ ಯಾವ ಜಾತಿಯ “ಹಲಸು” ಇದೆ ಎಂದು ಬಲ್ಲ ಜ್ಞಾನಿಗಳಿಗೆ ಈ ನಮ್ ಮಲೆನಾಡಲ್ಲಿ ಬರವಿಲ್ಲ. ಬೆಳುವ ಹಲಸನ್ನು ನಿರಾಯುಧರಾಗಿ ಬಗೆದು ಗುಳುಂ ಎಂದು ನುಂಗುವುದು ಎಷ್ಟು ಸುಲಭವೋ ಅಷ್ಟೇ ಕಷ್ಟ ಚಂದ್ರಭಕ್ಕೆ ಹಲಸಿನ ಮೇಣದಿಂದ ತಪ್ಪಿಸಿಕೊಳ್ಳೋದು. ಏನೇ ಆದರೂ ಹಲಸಿನ ಹಣ್ಣನ್ನು ಬಗೆದು ತಿಂದುತೇಗುವುದರಲ್ಲಿರೋ ಗಮ್ಮತ್ತು […]
ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆಮಲೆಯ ನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನ ರೂಢಿಗೆ– ಕುವೆಂಪು ಕೋಟಿ ಧನವಿದ್ದರೂ ಪಟ್ಟಣವು ಗೋಳು, ಕಾಸಿಲ್ಲದಿದ್ದರೂ ಸುಖ ಹಳ್ಳಿ ಬಾಳು– ಕುವೆಂಪು ಮಲೆನಾಡೆಂದರೆ ಕರ್ನಾಟಕದ ಕಾಶ್ಮೀರ, ಪ್ರಕೃತಿಯ ಪರ್ಣಶಾಲೆ, ಅರಣ್ಯರಮಣಿಯ ವಿಲಾಸಕ್ಷೇತ್ರ.– ಕುವೆಂಪು ಪ್ರಕೃತಿ ತನ್ನನ್ನು ವಂಚಿಸಲೆಳಸುವವರ ಮೇಲೆ ಮುಯ್ಯಿ ತೀರಿಸಿಕೊಳ್ಳದೆ ಬಿಡುವುದಿಲ್ಲ.– ಕುವೆಂಪು ನಗರಗಳಲ್ಲಿ ಮಹಾ ಪರ್ವತೋಪಮ ಕಟ್ಟಡಗಳನ್ನು ಕಟ್ಟುವುದಕ್ಕೆ ನಮಗೆ ದುಡ್ಡು ಇದೆ. ಆದರೆ ಹಳ್ಳಿಗಳಲ್ಲಿ ಬಾವಿ ತೋಡಲು ಹಣವಿಲ್ಲ.– ಕುವೆಂಪು
ನನಗಂತೂ ಕಾಡುಪ್ರಾಣಿಗಳ ಹೆದರಿಕೆ ಕೊಂಚವೂ ಇರಲಿಲ್ಲ. ಅಲ್ಲದೆ ಹೆದರುವುದರಿಂದ ಪ್ರಯೋಜನವೂ ಇರಲಿಲ್ಲ.– ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಮಳೆಗಾಗಿ ಕಾಡು ಬೇಕೇಬೇಕು ಅನ್ನೋ ಜನ ನಮ್ಮ ಒತ್ತುವರಿ ಮಾತ್ರ ಹಾಗೇ ಇರಲಿ ಎಂದು ಬಯಸುತ್ತಾರೆ.– ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಕಾಡುಗಳಿಲ್ಲದ, ಕಾಡುಪ್ರಾಣಿಗಳಿಲ್ಲದ ಪರಿಸರವು ಶ್ಮಶಾನಕ್ಕಿಂತ ಭೀಕರವಾಗಿ ಕಾಣುತ್ತವೆ.– ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಯಾರಿಗೆ ತಾವು ಇದ್ದಲ್ಲೇ ಎಲ್ಲವೂ ಕುತೂಹಲಕರವಾಗಿ ಇರುವುದಿಲ್ಲವೋ ಅವರು ಈ ಭೂಮಂಡಲದ ಮೇಲೆ ಎಲ್ಲಿ ಟೂರ್ ಹೋದರೂ, ಇಂಟರೆಸ್ಟಿಂಗ್ ಆಗಿ ಇರೋದಿಕ್ಕೆ ಆಗಲ್ಲ.– ಕೆ.ಪಿ.ಪೂರ್ಣಚಂದ್ರ ತೇಜಸ್ವಿ ನನಗೂ […]
ಪ್ರತಿಯೊಂದು ಮಗುವೂ ಹುಟ್ಟುತ್ತಲೆ ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು ಅಲ್ಪ ಮಾನವನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ವಿಶ್ವಮಾನವನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು. ಹುಟ್ಟುವಾಗ ವಿಶ್ವಮಾನವನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು ಬುದ್ಧನನ್ನಾಗಿ ಪರಿವರ್ತಿಸುವುದೇ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಪ್ರಪಂಚದ ಮಕ್ಕಳೆಲ್ಲ ಅನಿಕೇತನರಾಗಬೇಕು, ಲೋಕ ಉಳಿದು ಬಾಳಿ ಬದುಕಬೇಕಾದರೆ! ಮಾನವನ ವಿಕಾಸದ ಹಾದಿಯಲ್ಲಿ ಆಯಾ ಕಾಲದ […]
ಮಲೆನಾಡಮ್ಮನ ಮಡಿಲಿನಲಿ ಕರುಗಿಲೊಡಲಿನಲಿ ಮನೆಮಾಡಿರುವೆನು ಸಿಡಿಲಿನಲಿ ಮಿಂಚಿನ ಕಡಲಿನಲಿ! ಬನಗಳ ಬೀಡು ಚೆಲ್ವಿನ ನಾಡು ಮೋಹನ ಭೀಷಣ ಮಲೆನಾಡು! ನೇಸರು ಮೂಡುವ ಪೆಂಪಿಹುದು, ಮುಳುಗುವ ಸೊಂಪಿಹುದು; ತಿಂಗಳ ಬೆಳಕಿನ ಕಾಂತಿಯಿದೆ, ಇರುಳಿನ ಶಾಂತಿಯಿದೆ, ಕೋಗಿಲೆಯಲ್ಲಿ ಲಾವುಗೆಯಲ್ಲಿ ಗಿಳಿಗಳ ನುಣ್ಣರವಿಹುದಿಲ್ಲಿ! ಮೊರೆಯುತ ಹರಿಯುವ ತೊರೆಯಿಹುದು, ತುಂಬಿದ ಕೆರೆಯಹುದು; ಹಾಡುತಲೇರಲು ಬೆಟ್ಟವಿದೆ, ಬಣ್ಣಿಸೆ ಘಟ್ಟವಿದೆ. ಬಿಸಿಲಿದೆ, ತಂಪಿದೆ; ಹೂಗಳ ಕಂಪಿದೆ; ಹಸುರಿನ, ಹಣ್ಣುಗಳಿಂಪಿನೆದೆ! ರನ್ನನು ಪಂಪನು ಬಹರಿಲ್ಲಿ; ಶ್ರೀ ಗುರುವಿಹನಿಲ್ಲಿ ಮಿಲ್ಟನ್, ಷೆಲ್ಲಿ ಬಹರಿಲ್ಲಿ; ಕವಿವರರಿಹರಿಲ್ಲಿ! ಮುದ್ದಿನ ಹಳ್ಳಿ ಈ […]
ಓ ನನ್ನ ಚೇತನಆಗು ನೀ ಅನಿಕೇತನ! ರೂಪರೂಪಗಳನು ದಾಟಿನಾಮಕೋಟಿಗಳನು ಮೀಟಿ,ಎದೆಯ ಬಿರಿಯೆ ಭಾವದೀಟಿ,ಓ ನನ್ನ ಚೇತನಆಗು ನೀ ಅನಿಕೇತನ! ನೂರು ಮತದ ಹೊಟ್ಟ ತೂರಿ,ಎಲ್ಲ ತತ್ತ್ವದೆಲ್ಲೆ ಮೀರಿ,ನಿರ್ದಿಗಂತವಾಗಿ ಏರಿ,ಓ ನನ್ನ ಚೇತನಆಗು ನೀ ಅನಿಕೇತನ! ಎಲ್ಲಿಯೂ ನಿಲ್ಲದಿರು;ಮನೆಯನೆಂದೂ ಕಟ್ಟದಿರು;ಕೊನೆಯನೆಂದೂ ಮುಟ್ಟದಿರು;ಓ ಅನಂತವಾಗಿರು!ಓ ನನ್ನ ಚೇತನಆಗು ನೀ ಅನಿಕೇತನ! ಅನಂತ ತಾನ್ ಅನಂತವಾಗಿಆಗುತಿಹನೆ ನಿತ್ಯಯೋಗಿ;ಅನಂತ ನೀ ಅನಂತವಾಗು;ಆಗು, ಆಗು, ಆಗು, ಆಗು,ಓ ನನ್ನ ಚೇತನಆಗು ನೀ ಅನಿಕೇತನ! – ಕುವೆಂಪು Vishwamanava Geethe pdf in Kannada Vishwamanava […]