Categories
Quotes

Swathi Rajesh Quotes about malnad

ಈ ಸಲ ಕಾರ್ತಿಕ ಮಾಸದ ಕೊನೆಯಲ್ಲಿ
ಕೊಟ್ಟೆಮಣೆಗೆ ಕಾಲು ಕೊಟ್ಟು
ಕೊನೆ ತೆಗಿಬೇಕಂದ್ರೆ ಕತ್ತಲೆಗಟ್ಟೋ
ಮಳೆಯ ಕಡೆಗಣಿಸಿ ಔಷಧಿ ಹೊಡೀಬೇಕಲ್ಲಾ…..

ಮಳೆಯ ಚೇಷ್ಟೆಯ ನಡುವೆಯೂ ನಮ್ಮ ಇಸ್ಕೂಲಿನ ಗೇಟನ್ನು ಕಂಡಾಗ ಸವಾರಿ ಹೊರಟ ದಾರಿ ಒಮ್ಮೆಲೆ ಮರೆತಂದಿದೆ ……

ಹಸಿರ ಉಸಿರಲಿ ರಾಮನ ಮಂಟಪ……….
ತುಂಗೆಯ ಶ್ರೇಯಕ್ಕೆ ಬಿಳಿಗೆಂಪು ಕೇಂದ್ರವಿದು……..
ಕಂಡು ಕಣ್ತುಂಬಿಕೊಂಡಾಗ ಸೊಗಸುಗಳ ಹೂರಣವಿದು………

ಹಸಿರ ಚಾದರ ಹೊದ್ದ ಪುಟ್ಟ ಗೂಡಲ್ಲಿ ಕೂತು ಮಳೆನಾಡ ಮಳೆಹನಿಗಳ ಎಣಿಸುತ್ತಿರುವಂತೆ ..

ಹೊಸ ಪದಮುತ್ತುಗಳ ಪೋಣಿಸುವ ಆಶಾಭಾವದಿ ಹನಿಗಳಲ್ಲಿ ಮಿಂದೇಳುತ್ತಿದ್ದಾರಲ್ಲ ನಮ್ಮ ಕನ್ನಡದ ಕವಿಸ್ವರ್ಣ ಮುಕುಟ ..

ಕಲ್ಪನೆಯ ಬೆನ್ನೇರಿ ಸಾಗುವಾಗ ಸೇತುವೆಯ ಸರಳುಗಳು ಹಾಗೇ ಸುಮ್ಮನೆ ಕಣ್ಣಲ್ಲಿ ಮಿಂಚಿ ಹೋದಂತಿವೆ….

Advertisement
Hoi Malnad Advertisement