Categories
Author

ಅಕ್ಷತಾ ಹುಂಚದಕಟ್ಟೆ – Akshata Hunchadakatte

ವಿಚಾರಣೆಗಳುಮಾಹಿತಿ
ಪೂರ್ಣ ಹೆಸರುಅಕ್ಷತಾ ಹುಂಚದಕಟ್ಟೆ
ಹುಟ್ಟಿದ ದಿನಾಂಕ1980
ಹುಟ್ಟಿದ ಸ್ಥಳತೀರ್ಥಹಳ್ಳಿ ತಾಲೋಕಿನ ಹುಂಚದಕಟ್ಟೆ
ತಂದೆಯ ಹೆಸರುಕೆ.ವಿ.ಕೃಷ್ಣಮೂರ್ತಿ
ತಾಯಿಯ ಹೆಸರುಶೈಲಾ
ಉದ್ಯೋಗಲೇಖಕಿ, ಪ್ರಕಾಶಕಿ
ಶಿಕ್ಷಣ
ಹವ್ಯಾಸಗಳು

ಅಕ್ಷತಾ ಹುಂಚದಕಟ್ಟೆ – Akshata Hunchadakatte ಅವರು ಹುಟ್ಟಿದ್ದು 1980ರಲ್ಲಿ, ತೀರ್ಥಹಳ್ಳಿ ತಾಲೋಕಿನ ಪುಟ್ಟ ಗ್ರಾಮ ಹುಂಚದಕಟ್ಟೆಯ ಕೆ.ವಿ.ಕೃಷ್ಣಮೂರ್ತಿಯವರ ಮೊದಲ ಮಗಳು. ತಾಯಿ ಶೈಲಾ ಅವರಿಂದ ಸಾಹಿತ್ಯಾಭಿರುಚಿ ಹತ್ತಿಸಿಕೊಂಡ ಅಕ್ಷತಾ, ಕನ್ನಡ ಸಾಹಿತ್ಯಲೋಕದಲ್ಲಿ ಲೇಖಕಿಯಾಗಿ, ಪ್ರಕಾಶಕಿಯಾಗಿ ತಮ್ಮದೇ ಹೆಸರು ಗಳಿಸಿದ್ದಾರೆ . ಅಕ್ಷತಾ ಕೆ. ಎಂಬ ಹೆಸರಿನಲ್ಲಿ ಪರಿಚಿತರಾದ ಇವರು  ಈಗ ಸಾಹಿತ್ಯ ವಲಯಕ್ಕೆ ಅಕ್ಷತಾ ಹುಂಚದಕಟ್ಟೆ ಎಂದೇ ಚಿರಪರಿಚಿತರು.

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಓದಿದ ಅವರು, ಅಲ್ಲಿನ ಸಾಹಿತ್ಯಿಕ ವಾತಾವರಣದಿಂದ ಪ್ರೇರೇಪಣೆಗೊಂಡು ಕವಿತೆ ಬರೆಯಲು ಶುರುಮಾಡಿದರು. ಅಕ್ಷತಾ ಕಾಲೇಜುದಿನಗಳಲ್ಲೇ  ಕ್ರೈಸ್ಟ್ ಕಾಲೇಜಿನ ಬೇಂದ್ರೆ ಕಾವ್ಯ ಪ್ರಶಸ್ತಿ ಪಡೆದವರು, ‘ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ’ ಅವರ ಮೊದಲ ಕವನ ಸಂಕಲನ. ರೈತ ಹೋರಾಟಗಾರ ಕಡಿದಾಳು ಶಾಮಣ್ಣನವರ ಆತ್ಮಕಥನ ‘ಕಾಡತೊರೆಯ ಜಾಡು’ ಕೃತಿಯ ನಿರೂಪಣೆ ಮತ್ತು ಸಂಗ್ರಹ, ಕನ್ನಡದ ಮಹತ್ವದ ಲೇಖಕ, ವಿಮರ್ಶಕ ಕಿ.ರಂ.ನಾಗರಾಜ ಅವರ ಬೇಂದ್ರೆ ಕಾವ್ಯ ಕುರಿತ ಭಾಷಣಗಳನ್ನು ಬರಹ ರೂಪಕ್ಕೆ ತಂದು ‘ಮತ್ತೆ ಮತ್ತೆ ಬೇಂದ್ರೆ’ ಹೆಸರಿನಲ್ಲಿ ಪ್ರಕಟ. ಸದ್ಯ ಶಿವಮೊಗ್ಗದಲ್ಲಿ ವಾಸಿಸುತ್ತಿರುವ ಅಕ್ಷತಾ ಹುಂಚದಕಟ್ಟೆ ಅವರು ಅಹರ್ನಿಶಿ ಪ್ರಕಾಶನವನ್ನು ನಡೆಸುತ್ತಿದ್ದಾರೆ.

Advertisement
Advertisement Advertisement
Advertisement
Advertisement Advertisement