ವಿಚಾರಣೆಗಳು ಮಾಹಿತಿಪೂರ್ಣ ವಿವರ ಹೆಸರು ಕಾರ್ತಿಕಾದಿತ್ಯ ಬೆಳೋಡು (Karthik Adithya Belgodu) ಹುಟ್ಟಿದ ದಿನಾಂಕ ಹುಟ್ಟಿದ ಸ್ಥಳ ಬೆಳ್ಗೋಡು ಗ್ರಾಮ, ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ತಂದೆಯ ಹೆಸರು ತಾಯಿಯ ಹೆಸರು ಉದ್ಯೋಗ ಕೃಷಿ ಶಿಕ್ಷಣ ಮೂಡಿಗೆರೆ (ವಿದ್ಯಾಭ್ಯಾಸ ಪೂರೈಸಿದ್ದಾರೆ) ಹವ್ಯಾಸಗಳು ಪರಿಸರ ಕುರಿತು ಜನಜಾಗೃತಿ, ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಪರಿಸರದ ಮಹತ್ವ ತಿಳಿಸುವುದು, ಪುಸ್ತಕ ಪ್ರಕಾಶನ ಪ್ರಕಟಿತ ಪುಸ್ತಕಗಳು ಕಾಟಿಹರದ ತಿರುವು, ಕಾಡು ಹಾದಿಯ ಜಾಡು ಹತ್ತಿ, ನಾನೂ-ನೀವೂ ಜೊತೆಗೊಂದಿಷ್ಟು, ಪ್ಯಾರಾಸೈಟ್ ಕಾರ್ತಿಕಾದಿತ್ಯ ಬೆಳೋಡು – […]
Category: Author
– ಅಭಿ ತೀರ್ಥಹಳ್ಳಿ, Abhi Thirthahalli ಸರಳ ವಿವಾಹ, ಸುಂದರ ಬದುಕು: “ಮಂತ್ರ ಮಾಂಗಲ್ಯ” – Kuvempu Mantra Mangalyaಕೆಲವು ಕೃತಿಗಳು ನಮ್ಮನ್ನು ಕೇವಲ ಓದುಗರನ್ನಾಗಿಸಿ ಸುಮ್ಮನಾಗಿಸುವುದಿಲ್ಲ; ಬದಲಾಗಿ ನಮ್ಮ ಬದುಕಿನ ದೃಷ್ಟಿಕೋನವನ್ನೇ ಅತ್ಯಂತ ಆಪ್ತವಾಗಿ ವಿಸ್ತರಿಸುತ್ತವೆ. ರಾಷ್ಟ್ರಕವಿ ಕುವೆಂಪು ಅವರು ರೂಪಿಸಿರುವ “ಮಂತ್ರ ಮಾಂಗಲ್ಯ” ಕೇವಲ ಒಂದು ವಿವಾಹದ ಕೈಪಿಡಿಯಲ್ಲ, ಅದೊಂದು ಅತ್ಯಂತ ಸುಂದರವಾದ ಹಾಗೂ ಸರಳವಾದ ಜೀವನ ದರ್ಶನ. ಮನುಷ್ಯ ತನ್ನ ಬದುಕಿನ ಮಹತ್ತರ ಘಟ್ಟವಾದ ವಿವಾಹವನ್ನು ಆಡಂಬರಗಳಿಲ್ಲದೆ, ಸಮಾನತೆ ಮತ್ತು ಸಕಾರಾತ್ಮಕ ಚಿಂತನೆಗಳ […]
– ಅಭಿ ತೀರ್ಥಹಳ್ಳಿ Abbi Thirthahalli ರಕ್ಷಿತ್ ತೀರ್ಥಹಳ್ಳಿಯವರ “ಆರು ಎಸೆತಗಳು” ಕೇವಲ ಕಥೆಗಳ ಗುಚ್ಛವಲ್ಲ, ಅದು ಮನುಷ್ಯನ ಮನಸ್ಸಿನ ಆಳದ ಭಾವನೆಗಳನ್ನು ಶೋಧಿಸುವ ಒಂದು ಅಪರೂಪದ ಕಥಾಸಂಕಲನ. ಮನುಷ್ಯನು ತನ್ನ ಹೆಚ್ಚಿನ ಸಮಯವನ್ನು ಭಾವನೆಗಳ ಜೊತೆ ಕಳೆಯುತ್ತಾನೆ. ಆ ಸಾಂಗತ್ಯವೇ ಅವನ ಬದುಕಿನ ಉನ್ನತಿ ಅಥವಾ ಅವನತಿಗೆ ಕಾರಣವಾಗುತ್ತದೆ. ಈ ಆಳವಾದ ಮಾನವೀಯ ತತ್ವವನ್ನು ಹೊತ್ತ ಈ ಆರು ಕತೆಗಳ ಭಾವಲೋಕದಲ್ಲಿ ನಾನೇ ಖುದ್ದಾಗಿ ನಡೆದು ಬಂದ ಅನುಭವವನ್ನು ನಿಮ್ಮ ಮುಂದಿಡುತ್ತಿದ್ದೇನೆ. ಮೊದಲಿಗೆ ತುಂಗೇಬೈಲಿನ ಮಂಜಪ್ಪನ […]
ಮಲೆನಾಡಿನ ವೈವಿಧ್ಯಮಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಆಡುಭಾಷೆಯ ಸೊಬಗನ್ನು ಸಮಾಜಿಕ ಜಾಲತಾಣದಲ್ಲಿ ದಾಖಲಿಸುವ ಉದ್ದೇಶದಿಂದ, ಖ್ಯಾತ ಲೇಖಕರು, ವಿಮರ್ಶಕರು ಹಾಗೂ ಅಂಕಣಕಾರರು ಆದ ಡಾ. ಕೆ. ಶ್ರೀಪತಿ ಹಳಗುಂದ ಅವರ “ಗನಗದಿರಾ – ಮಲೆನಾಡಿನ ಪದಪ್ರಪಂಚ” ಕೃತಿಯಲ್ಲಿ ೪೦೦ಕ್ಕೂ ಹೆಚ್ಚು ಅಪರೂಪದ ಪದಗಳನ್ನು ಸಂಗ್ರಹಿಸಿದ್ದಾರೆ. ಈ ಕೃತಿಯನ್ನು ಆಧಾರವಾಗಿ ಇಟ್ಟುಕೊಂಡು ಅವರ ಅನುಮತಿಯ ಮೇರೆಗೆ, ಆಯ್ದ ಪದಗಳ ಅರ್ಥ ಮತ್ತು ಆಡುಭಾಷೆಯ ಸೊಬಗಿನ ಚಿತ್ರಗಳ ಸರಣಿಗಳು, ನಮ್ಮ ಮುಂದಿನ ಪೋಸ್ಟ್ಗಳಲ್ಲಿ ನಿಮ್ಮ ಮುಂದೆ ಅನಾವರಣಗೊಳಿಸಲಿದ್ದೇವೆ. ಗನಗದಿರಾ?ಇದೊಂದು ಸಂಭೋದನಾ ವಾಚಕ […]
ಮಲ್ನಾಡ್ ಬದ್ಕು… ಯತ್ ನೋಡುದ್ರು. ಮನ್ಸಿಗ್.. ಹಿತ ತರುವ ವಾತವರ್ಣ.. ಮಳಿಗ್ ಏನ್ ಕಮ್ಮಿಲ್ಲ… ಬಿಸ್ಲಿಗ್ ಏನ್ ಕಮ್ಮಿಲ್ಲ… ಹಂಗಂತ ಸುಮ್ನೆ.. ಕುಂತ್ರೆ.. ಬದ್ಕ್ ಏನ್ ನಡೆದ್ಲಾ…ಮಳ್ಗಾಲ್ ಬಂದ್ರೆ… ಸಸ್ ನಟ್ಟಿ..ಬೇಸ್ಗೆ.. ಬಂದ್ರೆ ಗದ್ದೆ ಕೊಯ್ಲು ಒಕ್ಲಾಟ.. ಚಳಿಗಾಲ್.. ಬಂದ್ರೆ ಅಡ್ಕೆ ಕೊಯ್ಲು…ಹಿಂಗೆ ಒಂದ್ರು ಮೇಲೊಂದ್ ಕೆಲ್ಸ… ಯಂತಕ್ಕು.. ಪೂರ್ಸೋತ್ತಿಲ್ದು ಬದ್ಕ್… ನಮ್ ಮಲ್ನಾಡ್ ಬದ್ಕ್… ಹಂಗೆ.. ಊಟ್ ಉಪ್ಚಾರ್ಕೆ ಬಂದ್ರೆ.. ಹೊಟ್ಟೆಗ್ ಏನ್ ಕಮ್ಮಿ ಇರುದ್ಲಾ… ಹೊಳೆ ಬದಿ ಗಾಣ ಕಟ್ ಬಂದ್ರೆ.. ಅಪ್ರೂಪಕ್ಕೆ ಗಾಣಕ್ […]
– ಅಭಿ ತೀರ್ಥಹಳ್ಳಿ Abbi Thirthahalli ಕೆಲವೊಮ್ಮೆ ನಾವು ಅರಸಿ ಹೊರಟದ್ದಕ್ಕಿಂತ, ಅನಿರೀಕ್ಷಿತವಾಗಿ ಸಿಗುವ ಒಡನಾಟ ಮತ್ತು ಪುಸ್ತಕಗಳು ಮನಸ್ಸಿಗೆ ಹೆಚ್ಚು ಆಪ್ತವಾಗುತ್ತವೆ. ಕೆಲವು ತಿಂಗಳುಗಳ ಹಿಂದೆ ಪುಸ್ತಕದ ಹುಡುಕಾಟದಲ್ಲಿ ಕುಪ್ಪಳಿಯ ಕುವೆಂಪು ಅಧ್ಯಯನ ಕೇಂದ್ರಕ್ಕೆಂದು ಹೋದವನು, ಅಲ್ಲೇ ಸಮೀಪದಲ್ಲಿದ್ದ ಕುವೆಂಪುರವರ ಅಜ್ಜಿ ಮನೆ, ಅವರು ಹುಟ್ಟಿದ ಸ್ಥಳವಾದ ಹಿರೇಕೊಡಿಗೆಗೆ ಭೇಟಿ ನೀಡಿದ್ದೆ. ನಾನು ಪದವಿ ಓದುತ್ತಿರುವಾಗ ಒಮ್ಮೆ ಅಲ್ಲಿಗೆ ಭೇಟಿ ಕೊಟ್ಟದ್ದು ನೆನಪಿದೆ. ತೇಜಸ್ವಿಯವರು ಮೀನು ಹಿಡಿಯಲೆಂದು ಕಾಡೊಳಗೆ ಹೊಕ್ಕು, ನೀರವ ಮೌನದಲ್ಲಿ ಗಾಳ ಹಿಡಿದು […]
– ಅಭಿ ತೀರ್ಥಹಳ್ಳಿ Abhi Thirthahalli ಸ್ವಪ್ನ ಪುಸ್ತಕ ಮಳಿಗೆಯ ಶೆಲ್ಫಿನಲ್ಲಿ ಎರಡು ಬಾರಿ ಕಣ್ಣಿಗೆ ಬಿದ್ದರೂ ಯಾಕೋ ಇದನ್ನು ತೆಗೆದುಕೊಳ್ಳುವ ಮನಸ್ಸಾಗಿರಲಿಲ್ಲ. ಆದರೆ ಮೂರನೇ ಬಾರಿಗೆ ಹೋದಾಗ ಸುಮ್ಮನೆ ತೆಗೆದು ಬ್ಯಾಸ್ಕೆಟ್ ಒಳಗೆ ಹಾಕಿಕೊಂಡೆ. ಇದಕ್ಕೆ ಮುಖ್ಯ ಕಾರಣ ಆ ಪುಸ್ತಕದ ಶೀರ್ಷಿಕೆ ಮತ್ತು ನನ್ನದೊಂದು ತಮಾಷೆಯ ಪ್ರಮಾದ. ನಾನು ಸಾಮಾನ್ಯವಾಗಿ ಪುಸ್ತಕದ ಮುಖಪುಟ ಹಾಗೂ ಶೀರ್ಷಿಕೆ ನೋಡಿ ಓದಲು ಆಯ್ಕೆ ಮಾಡುವ ಖಯಾಲಿ ಉಳ್ಳವನು. ಅಂದು ಕಾರ್ತಿಕಾದಿತ್ಯ ಬೆಳಗೋಡು ಅವರ “ಕಾಡು ಹಾದಿಯ ಜಾಡು […]
– ಅಭಿ ತೀರ್ಥಹಳ್ಳಿ Abhi Thirthahalli ರಕ್ಷಿತ್ ತೀರ್ಥಹಳ್ಳಿ Rakshith Thirthahalliಯವರ “ಕಾಡಿನ ನೆಂಟರು Kadina Nentaru” ಕಥಾಸಂಕಲನವು ಮಲೆನಾಡು ಎಂದರೆ ಕೇವಲ ಮಂಜು, ಮಳೆ ಮತ್ತು ದಟ್ಟ ಹಸಿರಿನ ರಮ್ಯಲೋಕವಲ್ಲ; ಅದರಾಚೆಗಿನ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆ, ಅಸಹಾಯಕತೆ ಮತ್ತು ಬದಲಾಗುತ್ತಿರುವ ಬದುಕಿನ ಕಟು ವಾಸ್ತವಗಳ ತಾಣ ಎಂಬುದನ್ನು ಅತ್ಯಂತ ಸೂಕ್ಷ್ಮವಾಗಿ ತೆರೆದಿಡುತ್ತದೆ. ಕುವೆಂಪು ಮತ್ತು ತೇಜಸ್ವಿಯವರ ಕಾಲದ ಮಲೆನಾಡಿನ ಚಿತ್ರಣಕ್ಕೂ, ಇಂದಿನ ಮಲೆನಾಡಿನ ವಾಸ್ತವಕ್ಕೂ ಇರುವ ಕಂದಕವನ್ನು ಈ ಕೃತಿ ನಿರ್ದಾಕ್ಷಿಣ್ಯವಾಗಿ ಕಟ್ಟಿಕೊಡುತ್ತದೆ. ರಕ್ಷಿತ್ […]
ನಮ್ಮನೆ ಒಲೆ ನಾವು ಚಿಕ್ಕವರಿದ್ದಾಗ ಎದ್ದು ಹಲ್ಲುಜ್ಜಿ ಮೊದ್ಲು ಬರ್ತಿದ್ದ ಜಾಗನೇ ಈ ಒಲೆ ದಂಡೆ ಬುಡ. ಈ ‘ಒಲೆ’ದಂಡೇಲಿ ಚಳಿ ಕಾಸ್ತ, ಕಾಫಿ ಚರ್ಗಿಲಿ ಕಾಫಿನ ಲೋಟಕ್ಕೆ ಬಗ್ಗಿಸ್ಕೊಂಡು, ಲೋಟದಲ್ಲಿ ಕಾಫಿ ಖಾಲಿ ಆಗೋತನಕ ಕಾಫಿ ಕುಡಿದು, ಅಮ್ಮ ಹೊರಗೆ ಹೋಗ್ತಿದ್ದಂಗೆ ಬೇಗ ಬೇಗ ಮತ್ತೆ ಕಾಫಿ ಬಕ್ಸ್ ಕಂಡು ಅಮ್ಮ ಬರೋ ಮುಂಚೆ ಆ ಕಾಫಿನ ಕುಡಿದು ಮುಗಿಸಿ ಬಿಡ್ತಿದ್ವಿ, ಅಮ್ಮಂಗೆ ಗೊತ್ತಿಲ್ದೆ ಇದ್ದಂಗೆ ಹಿಂಗ್ ಎಷ್ಟು ಸಲ ಕಾಫಿ ಬಕ್ಸ್ ಕಂಡು ಚಳಿ […]
– ಸುಧನ್ವ ಗಡಿಕಲ್ ಬೇಸಿಗೆ ಬಿಸಿಯಲಿ ಬೆಂದ ಇಳೆಯನ್ನು ತಂಪೆರೆವ ಸಮಯ,ಬಿಸಿಲ ಕಾವಿಗೆ ತಾಕಿತ್ತು ಪ್ರಕೃತಿಯ ವಿನಯ..ಗಾಳಿಯ ಚಾಮರವು ಒಂದೆಡೆ ಬೀಸಲು,ಗುಡುಗು ಸಿಡಿಲ ನಾದವು ಮುಗಿಲಲ್ಲಿ ಮೊಳಗಲು… ಆಕಾಶದ ಅಂಗಳದಿ ಪನ್ನೀರಿನ ಮಾಲೆ,ಧರೆಗೆ ಇಳಿದಂತೆ ಆನಂದದ ಲೀಲೆ…ಪ್ರತಿ ಹನಿಯ ಸ್ಪರ್ಶಕೆ ಮಣ್ಣಿನ ಘಮಲು,ಹಸಿರ ಕಾಂತಿ ಹಬ್ಬಿತ್ತು ವನದೊಳು ಪಸರಿಸಲು… ಬಣಗುಟ್ಟಿದ ಮರಗಿಡಗಳು ಇಂದು ನಲಿದಿವೆ,ಮಳೆಯ ಮುತ್ತಿಗೆ ಮೈಮರೆತು ಓಲಾಡಿವೆ…ತಣಿದ ಭೂಮಿ ಮೆಲ್ಲಗೆ ಕಣ್ಣು ತೆರೆದಿದೆ,ಒಣಗಿದ ಕನಸಲಿ ಹಸಿರ ಚಿಗುರು ಮೂಡಿದೆ..!
