Categories
Malnad Malnad information Rain Thirthahalli trekking

ಮುಂಗಾರಿನ ಮಡಿಲಲ್ಲಿ ಪ್ರಕೃತಿಯ ಆರಾಧನೆ – Rainathon Season 18

ಮಳೆಯೆಂದರೆ ಎಲ್ಲರಿಗೂ ಪ್ರೀತಿ. ಕೆಲವರಿಗೆ ಮಳೆಯಲ್ಲಿ ನೆನೆಯುವುದು ಖುಷಿ ಕೊಟ್ಟರೆ, ಇನ್ನು ಕೆಲವರಿಗೆ ಮಳೆಯನ್ನು ನೋಡುವುದೇ ಒಂದು ರೋಮಾಂಚನ. ಕೃಷಿ ಮನೆತನದ ಕುಟುಂಬಗಳಲ್ಲಿ‌ ಮಳೆಯಲ್ಲಿಯೇ ನೆನೆದು ಕೆಲಸ ಪೂರೈಸುವ ಅನಿವಾರ್ಯತೆ ಇರುತ್ತದೆ. ಹೀಗೆ, ಮಳೆ ಎಂಬ ವಿಸ್ಮಯ ಒಬ್ಬೊಬ್ಬರಿಗೆ ತನ್ನದೇ ರೀತಿಯಲ್ಲಿ ಸಂತೋಷವನ್ನು ತಂದುಕೊಡುತ್ತದೆ. ಇದೇ ಮಳೆಯ ಆನಂದವನ್ನು ಸವಿಯಲು ತೀರ್ಥಹಳ್ಳಿಯಲ್ಲಿ ನಡೆದ “ರೈನಥಾನ್ ೧೮ನೇ ಆವೃತ್ತಿ – Rainathon Season 18” ಅಭೂತಪೂರ್ವ ಯಶಸ್ಸನ್ನು ತಂದುಕೊಟ್ಟಿದೆ. ಬಹಳ ಉತ್ಸುಕತೆಯಿಂದ ಬೆಂಗಳೂರಿನಿಂದ ಆಗಮಿಸಿದ ಸಹಪಥಿಕರಾಗಲೀ ಅಥವಾ ಸುತ್ತಲ […]

Categories
Info Malnad information Rain Thirthahalli trekking

ಮಳೆನಡಿಗೆ, ಮಳೆಯಲ್ಲಿ ನಡಿಗೆ ಮಲೆನಾಡಿನ ಮಳೆಯಲ್ಲಿ ನಡಿಗೆ..! – Rainathon

ರೈನಥಾನ್ (Rainathon) ಇದರ 18 ನೆ ಆವೃತ್ತಿ 27 ಜೂನ್ 2026 ರಂದು ತೀರ್ಥಹಳ್ಳಿಯ ಹುರುಳಿ ಎಂಬ ಸ್ಥಳದಲ್ಲಿ ನಡೆಯಲಿದೆ, ಪ್ರತಿಬಾರಿಯಂತೆ ಈ ಬಾರಿಯೂ ಅಂದಾಜು 100+ ಹೆಚ್ಚು ಉತ್ಸಾಹಿಗಳು ಭಾಗವಹಿಸುವ ನಿರೀಕ್ಷೆಯಿದೆ. ಬೆಂಗಳೂರಿನಿಂದ 26 ಜೂನ್ 2026 ರ ರಾತ್ರಿ 8.30 ಕ್ಕೆ , 45 ಜನರ ಉತ್ಸಾಹಿ ಜನರ ತಂಡ ಹೊರಡಲು ಸಿದ್ಧವಾಗಲಿದೆ, ಈಗಾಗಲೇ ಅನೇಕರು Registration ಮಾಡಿದ್ದು. ಇನ್ನು ಕೆಲವೇ ಆಸನಗಳು ಖಾಲಿ ಇವೆ. Rainathon ಇದೊಂದು ವಿಶೇಷ ಮಲೆನಾಡಿನ ಮಳೆಯಲ್ಲಿ ಎಲ್ಲವನ್ನೂ […]

Categories
Author Kannada Malnad Rain

Pramod VK Lines About Malnad Nature

ಮಲ್ನಾಡ್ ಬದ್ಕು… ಯತ್ ನೋಡುದ್ರು. ಮನ್ಸಿಗ್.. ಹಿತ ತರುವ ವಾತವರ್ಣ.. ಮಳಿಗ್ ಏನ್ ಕಮ್ಮಿಲ್ಲ… ಬಿಸ್ಲಿಗ್ ಏನ್ ಕಮ್ಮಿಲ್ಲ… ಹಂಗಂತ ಸುಮ್ನೆ.. ಕುಂತ್ರೆ.. ಬದ್ಕ್ ಏನ್ ನಡೆದ್ಲಾ…ಮಳ್ಗಾಲ್ ಬಂದ್ರೆ… ಸಸ್ ನಟ್ಟಿ..ಬೇಸ್ಗೆ.. ಬಂದ್ರೆ ಗದ್ದೆ ಕೊಯ್ಲು ಒಕ್ಲಾಟ.. ಚಳಿಗಾಲ್.. ಬಂದ್ರೆ ಅಡ್ಕೆ ಕೊಯ್ಲು…ಹಿಂಗೆ ಒಂದ್ರು ಮೇಲೊಂದ್ ಕೆಲ್ಸ… ಯಂತಕ್ಕು.. ಪೂರ್ಸೋತ್ತಿಲ್ದು ಬದ್ಕ್… ನಮ್ ಮಲ್ನಾಡ್ ಬದ್ಕ್… ಹಂಗೆ.. ಊಟ್ ಉಪ್ಚಾರ್ಕೆ ಬಂದ್ರೆ.. ಹೊಟ್ಟೆಗ್ ಏನ್ ಕಮ್ಮಿ ಇರುದ್ಲಾ… ಹೊಳೆ ಬದಿ ಗಾಣ ಕಟ್ ಬಂದ್ರೆ.. ಅಪ್ರೂಪಕ್ಕೆ ಗಾಣಕ್ […]

Categories
Adike Blogs Kannada Malnad Rain

Sinchana Gadikal Lines About Malnad Nature

ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ನಮ್ಮ ಈ ಮಲೆನಾಡಿನಲಿ..ಕಾಡುಮೇಡುಗಳೇ ಆವರಿಸಿಕೊಂಡಿರುವ ಈ ಪ್ರಕೃತಿಯಲಿ..ಮನಸಿಗೆ ಹಿತ ಸಿಗುವುದು ಈ ಪ್ರಕೃತಿ ಮಾತೆಯ ಮಡಿಲಲಿ..ಹಕ್ಕಿಯ ಕಲರವದಿಂದ ಮೊಳಗುವ ಆ ಮುಸ್ಸಂಜೆಯಲಿ..ಅದೆಷ್ಟೊ ಪ್ರಾಣಿ ಪಕ್ಷಿಗಳು ತಾಣವನ್ನಾಗಿಸಿಕೊಂಡಿವೆ ಈ ಭುವಿಯಲಿ..ಮಳೆಗಾಲದಲ್ಲಿ ಭೂಮಿಗೆ ಚುಂಬಿಸುವ ಆ ಹನಿಗಳ ಸ್ಪರ್ಶದಲಿ..ಮೈ ಮರೆಯುವುದು ಆ ಮಣ್ಣಿನಿಂದ ಹೊರಹೊಮ್ಮುವ ಸುವಾಸನೆಯಲಿ..ಸೂರ್ಯನ ಕಿರಣಗಳು ಭುವಿಗೆ ಮುತ್ತಿಕ್ಕುವ ಮುಂಜಾನೆಯಲಿ..ಸ್ವರ್ಗವೇ ಧರೆಗಿಳಿದಂತಿರುತ್ತದೆ ನಮ್ಮ ಈ ಮಲೆನಾಡಿನಲಿ… ಮಳೆಯ ಬರುವಿಕೆಗಾಗಿ ಕಾದಂತಹ ಇಳೆಗೆಮಳೆಯ ಹನಿಗಳು ಸ್ಪರ್ಶಿಸುವ ಆ ಘಳಿಗೆಗಿಡ ಮರಗಳೆಲ್ಲ ಹಸಿರಾಗಿ ಮಡಿಲ್ಲೆಲ್ಲ ತಂಪಾಗಿದೆ ಭುವಿಗೆಮಳೆಯ […]

Categories
Author Kannada Poem Rain

ದಣಿದ ಧರೆಗೆ ವರುಣರಾಯನ ವರ..!

– ಸುಧನ್ವ ಗಡಿಕಲ್ ಬೇಸಿಗೆ ಬಿಸಿಯಲಿ ಬೆಂದ ಇಳೆಯನ್ನು ತಂಪೆರೆವ ಸಮಯ,ಬಿಸಿಲ ಕಾವಿಗೆ ತಾಕಿತ್ತು ಪ್ರಕೃತಿಯ ವಿನಯ..ಗಾಳಿಯ ಚಾಮರವು ಒಂದೆಡೆ ಬೀಸಲು,ಗುಡುಗು ಸಿಡಿಲ ನಾದವು ಮುಗಿಲಲ್ಲಿ ಮೊಳಗಲು… ಆಕಾಶದ ಅಂಗಳದಿ ಪನ್ನೀರಿನ ಮಾಲೆ,ಧರೆಗೆ ಇಳಿದಂತೆ ಆನಂದದ ಲೀಲೆ…ಪ್ರತಿ ಹನಿಯ ಸ್ಪರ್ಶಕೆ ಮಣ್ಣಿನ ಘಮಲು,ಹಸಿರ ಕಾಂತಿ ಹಬ್ಬಿತ್ತು ವನದೊಳು ಪಸರಿಸಲು… ಬಣಗುಟ್ಟಿದ ಮರಗಿಡಗಳು ಇಂದು ನಲಿದಿವೆ,ಮಳೆಯ ಮುತ್ತಿಗೆ ಮೈಮರೆತು ಓಲಾಡಿವೆ…ತಣಿದ ಭೂಮಿ ಮೆಲ್ಲಗೆ ಕಣ್ಣು ತೆರೆದಿದೆ,ಒಣಗಿದ ಕನಸಲಿ ಹಸಿರ ಚಿಗುರು ಮೂಡಿದೆ..!