Categories
Author Blogs Books Kannada

ನಾವೆಲ್ಲರೂ “ಕಾಡಿನ ನೆಂಟರು”!!!

– ಅಭಿ ತೀರ್ಥಹಳ್ಳಿ Abhi Thirthahalli ರಕ್ಷಿತ್ ತೀರ್ಥಹಳ್ಳಿ Rakshith Thirthahalliಯವರ “ಕಾಡಿನ ನೆಂಟರು Kadina Nentaru” ಕಥಾಸಂಕಲನವು ಮಲೆನಾಡು ಎಂದರೆ ಕೇವಲ ಮಂಜು, ಮಳೆ ಮತ್ತು ದಟ್ಟ ಹಸಿರಿನ ರಮ್ಯಲೋಕವಲ್ಲ; ಅದರಾಚೆಗಿನ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆ, ಅಸಹಾಯಕತೆ ಮತ್ತು ಬದಲಾಗುತ್ತಿರುವ ಬದುಕಿನ ಕಟು ವಾಸ್ತವಗಳ ತಾಣ ಎಂಬುದನ್ನು ಅತ್ಯಂತ ಸೂಕ್ಷ್ಮವಾಗಿ ತೆರೆದಿಡುತ್ತದೆ. ಕುವೆಂಪು ಮತ್ತು ತೇಜಸ್ವಿಯವರ ಕಾಲದ ಮಲೆನಾಡಿನ ಚಿತ್ರಣಕ್ಕೂ, ಇಂದಿನ ಮಲೆನಾಡಿನ ವಾಸ್ತವಕ್ಕೂ ಇರುವ ಕಂದಕವನ್ನು ಈ ಕೃತಿ ನಿರ್ದಾಕ್ಷಿಣ್ಯವಾಗಿ ಕಟ್ಟಿಕೊಡುತ್ತದೆ. ರಕ್ಷಿತ್ […]

Categories
Author Books Poornachandra Tejaswi Thirthahalli

ಪ್ರಕೃತಿ, ವಿಜ್ಞಾನ ಮತ್ತು ಮಲೆನಾಡಿನ ಬದುಕಿನ ಮುಖಾಮುಖಿಯೇ ಕರ್ವಾಲೊ!

-ಅಭಿ ತೀರ್ಥಹಳ್ಳಿ Abhi Thirthahalli “ಕರ್ವಾಲೊ Karvalo”, ಪೂರ್ಣಚಂದ್ರ ತೇಜಸ್ವಿ Purnachandra Tejaswi ಯವರ ಕೇವಲ ಒಂದು ರೋಚಕ ಕಾದಂಬರಿಯಲ್ಲ, ಬದಲಾಗಿ ಮಲೆನಾಡಿನ ಸಾಮಾಜಿಕ, ಪಾರಿಸರಿಕ ಹಾಗೂ ಸಾಂಸ್ಕೃತಿಕ ಪಲ್ಲಟಗಳನ್ನು ಅತ್ಯಂತ ಸೂಕ್ಷ್ಮವಾಗಿ ಕಟ್ಟಿಕೊಡುವ ಒಂದು ಮಹತ್ವದ ಕೃತಿ. ತೇಜಸ್ವಿಯವರ ಕೃತಿಗಳಲ್ಲಿ ನಾನು ಮೊದಲು ಓದಿದ ಹಾಗೂ ನನ್ನನ್ನು ಅತಿ ಹೆಚ್ಚು ಕಾಡಿದ ಪುಸ್ತಕವಿದು. ಇದನ್ನು ನಾನು ಐದು ಬಾರಿ ಓದಿರುವೆ. ಪ್ರತಿ ಬಾರಿಯೂ ಕೃತಿಯು ಹೊಸದೊಂದು ದೃಷ್ಟಿಕೋನವನ್ನು ತೆರೆದಿಡುತ್ತಲೇ ಹೋಗುತ್ತದೆ. ಕೇವಲ ಮಲೆನಾಡನ್ನು ರಮ್ಯವಾಗಿ, ಆದರ್ಶಮಯವಾಗಿ […]

Categories
Books

ಒಂದು ಕಾಡಿನ‌ ಪುಷ್ಪಕ ವಿಮಾನ – Ondu Kadina Puspaka Vimana Book

ಪಶ್ಚಿಮಘಟ್ಟದ ತಪ್ಪಲಿನ ಸ್ವರ್ಗದಂತಹಾ ಮಾಳ, ದುರ್ಗ, ಮಲೆಬೆಟ್ಟು ಇಂತಹಾ‌ ಪುಟ್ಟ ಪುಟ್ಟ ಊರುಗಳಲ್ಲಿ ಕಾಡು, ಹಸಿರು ಪರಿಸರದ ನಡುವಿನ ಸುತ್ತಾಟ, ಅಲ್ಲಿನ ಹಿರಿ- ಕಿರಿಯ ಜೀವಗಳ ಜೀವನದ ಕತೆ ಮುಂತಾದವುಗಳನ್ನು ಕಾಡಿಸುವ ಪುಟ್ಟ ಪುಟ್ಟ ಪರಿಸರ ಕಥಾನಕಗಳ ಸಂಗ್ರಹದ ಪುಸ್ತಕವೇ “ಒಂದು ಕಾಡಿನ ಪುಷ್ಪಕ ವಿಮಾನ”. ನಾವೂ ಇಂತದ್ದೊಂದು ಊರಲ್ಲಿ ಬದುಕಬೇಕಿತ್ತು ಎಂದೆನ್ನಿಸುವ, ಓದುತ್ತಾ ಹೋದಂತೆ ನಾವೇ ಆ ಊರುಗಳ ದಾರಿಯಲ್ಲಿ ನಡೆದಂತೆ, ಅಲ್ಲಿನ ಜೀವಗಳ ಮಧ್ಯೆ ನಾವೂ ಒಬ್ಬರಾದಂತೆ ಭಾವ ಮೂಡಿಸುತ್ತಾ ಹೋಗುತ್ತದೆ ಈ ಪುಸ್ತಕದ […]