– ಅಭಿ ತೀರ್ಥಹಳ್ಳಿ ದಕ್ಷಿಣ ಭಾರತದ ಚೆರಾಪುಂಜಿ ಹಾಗೂ ಮಲೆನಾಡಿನ ಹೆಬ್ಬಾಗಿಲು ಎಂದೇ ಹೆಸರಾಗಿರುವ ನಮ್ಮ ಆಗುಂಬೆಯ ಅಸ್ತಿತ್ವ ಇಂದು ಭೀತಿಯಲ್ಲಿದೆ. ಸೋಮೇಶ್ವರ ವನ್ಯಜೀವಿ ಧಾಮದ ನಡುವೆ ಹಾದುಹೋಗುವ ಆಗುಂಬೆ ಘಾಟಿ ರಸ್ತೆ ಕೇವಲ ವಾಹನಗಳ ಓಡಾಟಕ್ಕಿರುವ ಸಂಪರ್ಕ ಮಾರ್ಗವಲ್ಲ, ಅದು ಅಸಂಖ್ಯಾತ ಜೀವಿಗಳ ಆವಾಸಸ್ಥಾನ ಮತ್ತು ಲಕ್ಷಾಂತರ ಜನರ ಬದುಕಿನ ಆಧಾರ. ಆದರೆ, ಈ ಸೂಕ್ಷ್ಮ ಪರಿಸರದಲ್ಲಿ ಸುರಂಗ ಮಾರ್ಗ, ದ್ವಿಪಥ ರಸ್ತೆ ಮತ್ತು ಪಾದಚಾರಿ ಮಾರ್ಗ ನಿರ್ಮಿಸುವ ಹೊಸ ಪ್ರಸ್ತಾವನೆಯು ಇದೀಗ ಪರಿಸರ ಪ್ರೇಮಿಗಳನ್ನು […]
